Tuesday, April 28, 2009

ಸ್ವರಚಿತ ಕವನಗಳು

ಹುಡುಕಾಟ V/s ಹುಡುಗಾಟ

ಬಾಳಲ್ಲಿ ಇರಬೇಕು ಸ್ವಲ್ಪ ಹುಡುಗಾಟ,
ಇಲ್ಲವಾದರೆ ಬಾಳಿನ ನೆಮ್ಮದಿ ಗಾಗಿ ದಿನವು ಮಾಡಬೇಕು
........................... ಹುಡುಕಾಟ


೨೦ ೨೦ ಕ್ರಿಕೆಟ್

ಇದೋ ಬಂದಿದೆ IPL ಆಟ
batsman ಗಳ ಹೊಡೆದಾಟ
bowler ಗಳ ಪರದಾಟ
chears ಹುಡುಗಿರ ಕುಣಿದಾಟ
BCCI ಗೆ ಹಣದ ಹರಿದಾಟ
ಕೇಳುವವರಿಲ್ಲ ಸೋತ ತಂಡಗಳ ಮಾಲೀಕರ ಗೋಳಾಟ ............................


ದೋಸ್ತ್ ......

ಜೀವನ ಎಂಬ ಕ್ಯಾಮೆರಾದಲ್ಲಿ,

ಮನಸು ಎಂಬ ರೀಲು ಹಾಕಿ,

ಸ್ನೇಹ ಎಂಬ ಬಟನ್ ಒತ್ತಿದಾಗ,

ಈ ನನ್ನ ಹೃದಯದಲ್ಲಿ ಮೂಡುವುದೆ ನಿಮ್ಮ ಭಾವಚಿತ್ರ. !!!


ಜಗವೆಲ್ಲ ಮಲಗಿರಲು........

ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ....
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ............
ಯಾಕಂದ್ರೆ ಅವನು ಕಾಲ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ.......

Monday, April 20, 2009


ಶಕುಂತಲೆ.............

ಬಹಳ ದಿನಗಳ ಬಳಿಕ ಶಕುಂತಲೆಯ

ನೆನಪಾದ ದುಶ್ಯಂತ ಕಾಡಿಗೆ ಹೋದ

ಅಲ್ಲೇ ಆತ ಬಿಟ್ಟು ಹೋದಲ್ಲೆ ಅದೇ

ಆಶ್ರಮದಂಗಳದಲ್ಲೆ ಕುಳಿತಿದ್ದಳು ಆಕೆ...

ಬಳಿಸಾರಿ ಕಣ್ಣಲ್ಲಿ ಕಣ್ಣಿಟ್ಟು ನೋಡಹೊರಟನಾತ

ಆಕೆಯ ಕಣ್ಣಲ್ಲಿ ಅವನಿಗೆ ಕಂಡಿದ್ದು

ಅವಳಲ್ಲ...

ಸತ್ತ ಶಾಕುಂತಲೆ ಮತ್ತು ಶೂನ್ಯ


Thursday, April 16, 2009

ಇನ್ನೊಂದು ಇಷ್ಟು ಕವನಗಳು ...........

. ಪ್ರೇಮಗೀತೆ .
ನಿನಗಾಗಿ
ನ ಬರೆದೆ ಪ್ರೇಮಗೀತೆ
ಆದರೆ...
ಅದು ನಿನಗೆ ತಿಳಿಯದಾಗಿ
ನ ಕಳೆದೆ ಜೀವನವನ್ನು
ಕೇಳುತ್ತಾ ವಿರಹಗೀತೆ...


ಪ್ರೀತಿ ಅಂದ್ರೆ ಇದೇನಾ?

ಯಾವ ಹುಡುಗಿನಾ ನೋಡಿದ್ರೂ ನೀನೆ ಅನ್ನಿಸೋ ಭಾವನೆ,
ಎದುರಿಗೆ ಬಂದರೆ, ಎದೆ ಝಲ್ ಅನ್ನೋ ಕಸಿವಿಸಿ..


ಮಿಲನ ಆ ಮಿಲನ, ನಿನ್ನ ಕಣ್ಣಿನ ಆ ಮಿಲನ
ಹೊಡೆಯಿತು ಎನ್ನದೆಗೆ ಬಾಣ
ಚೂರಾಯಿತು ಈ ಪ್ರಾಣ

ನಿಜವೋ ಆ ನೋಟ ಮಜವೋ
ತಿಳಿಯದಾದೆನು ನಾನಂದು
ಒಲವ ತೋರಬಾರದ ನೀನಿಂದು

ನನ ಕಲ್ಲಿನ ಆ ಹೃದಯ
ಕಂಪಿಸಿದೆ ಇಂದು
ನಿನ ಒಲವಲಿ ತಾ ಮಿಂದು
ಹಾಡಿದೆ ಈ ಕವನ

ನನ್ನ ತನು ಮನದ ನೀರೆ
ದಯೆ ತೋರುತ ನೀ ಬಾರೆ


ಚಳಿಯಲ್ಲಿ....
ಹೊರಗೆ ಮಳೆಯಿರಲಿ , ಚಳಿಯಿರಲಿ...
ನನಗೆ ಬೇಕಾಗುವುದಿಲ್ಲ ಹೊದಿಕೆ...
ಯಾಕೆಂದರೆ.......................
ಒಳಗೆ ನನ್ನವಳು
ಪಕ್ಕದಲ್ಲಿ ತಬ್ಬಿ ಮಲಗಿರುವಾಗ...
ನನಗೆ ಯಾವಾಗಲೂ ಸೆಕೆ....


ಗೆಳತಿ...
ನಾನು SMS ಕಳುಹಿಸಿ ಕಳುಹಿಸಿ ಸೋತೆ...
ನೀನು SMS ಕಳುಹಿಸದೆ ಸೋತೆ'ಯ?..
ತುಂಡಾಗಬಹುದು ನಮ್ಮೀ ಸ್ನೇಹದ ಸೇತುವೆ..
ಹರಿಯಿಯಬಹುದು ಕಣ್ಣೀರಿನ ಕಾಲುವೆ....(?)


ನೆನಪು ~~
ನನ್ನ ಬಾಳ ಬೆಳಗುವ
ಬೆಳಕಾಗುವೆಯೆಂದೆ...
ನನ್ನ ಜೀವನದ
ನೆರಳಾಗಿ ಬರುವೆಯೆಂದೆ...
ಆದರೆ..................
ನೆನಪಾಗಿಯೆ ಉಳಿದೆ.....(~_~)


ನೀ ಲ್ಯಾಪ್ ಟಾಪ್ ಆದರೆ
ನಾ ಕಂಪ್ಯೂಟರ್
ನೀ ಡಿ ವಿ ಡಿ ಯಾದರೆ
ನಾ ಆಡಿಯೊ ಕ್ಯಾಸೆಟ್
ನೀ ಲಾಸ್ ವೇಗಸ್ ಆದರೆ
ನಾ ಬಾಂಬೆ ಸಿಟಿ
ನೀ ಹುಣ್ಣಿಮೆಯ ಚಂದಿರ ವಾದರೆ
ನಾ ಅಮವಾಸ್ಯೆಯ ರಾತ್ರಿ...


ಗೆಳತಿ
ನೀ ಹೂ ವಾದರೆ..
ನಾ ದುಂಬಿಯಾಗುವೆ
ನೀ ದುಂಬಿಯಾದರೆ..


- ವಿಮೆ-
ಗೆಳತಿ ನಾ ನಿನ್ನ
ಹಗಲಿರುಳು ಪ್ರೀತಿಸಿ ಕೊನೆಗೂ ಸೋತೆ
ಆದರೆ...
ನಾ ನಿನ್ನ ಪ್ರೀತಿಗಾಗಿ
ಮಾಡಿಸಿದ್ದರೆ ವಿಮೆ
ವಿಮೆಯ ಹಣದಿಂದ
ಗೆಲ್ಲುತಿರಬಹುದಿತ್ತು....(?)


ಕವನಾ ಮೂಡುವುದು (Muduvudu)
ಕಲ್ಪನೆಯಲ್ಲಾ ಅಥವಾ ಕನಸಲ್ಲಾ ??????????

ಕವನಾ ಮೂಡುವುದು(Muduvudu)

ಕಣ್ಣುಗಳು ಕಲ್ಪನೆಯಲ್ಲಿ ಕಲೆತಾಗ ,,,,,,,,,,,,,,,
ಕವಿ ನಿಸರ್ಗದಲ್ಲಿ ಬೆರೆತಾಗ ,,,,,,,,,,,,,,,,,,,
ಮನಸ್ಸನ್ನು ಕನಸು ಕವಿದಾಗ ,,,,,,,,,,,,,,,
ರಸ ನಿಮಿಷಗಳ ಸವಿದಾಗ ,,,,,,,,,,,,,,,,,,


ಕೆರೆ ನೀರಿಗೆ ಸುಳಿಗಾಳಿ ಸ್ವರ್ಶಿಸಿದಂತೆ,

ಅವಳ ಕಳೆಮೊಗದಲ್ಲಿ ಎಳೆನಗುವೊಂದು ಮಿಂಚುತಿತ್ತು.

ಮಿಂಚಿಗೆ ನಾನು ಕರಗಿ, ಮಳೆಯಾಗಿ ನೀರಾಗಿ ಹರಿದುಹೋಗುತ್ತಿದ್ದೆ.

ಸೇರುವುದೆಲ್ಲಿಗೋ ಅರಿಯೇ ಆದರೂ ಹರಿಯಬೇಕಿತ್ತು

ಹರಿಯುತ್ತಿದ್ದೆ ಅಷ್ಟೆ.




ಕೆಲವೊಂದು ಇಷ್ಟವಾದ ಅಲ್ಲಿ ಇಲ್ಲಿ ಕಂಡ ಕವನಗಳು

ಸ್ನೇಹಬಗ್ಗೆ

೧. ಸ್ನೇಹದ ಮಧುರತೆಯ ಸವಿಯಲು
ನನ್ನೆಲ್ಲಾ ನೋವುಗಳ ಮರೆಯಲು
ನಿಮ್ಮ ಸವಿ ಸನಿಹವ ಪಡೆಯಲು
ಕಾತುರದಿಂದ ಕಾಯುತಿರುವೆ
ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ

೨. ನೀನೆಷ್ಟು ಶ್ರೀಮಂತ ಅಂತಾ
ಗೊತ್ತಾಗಬೇಕ್ಕೆಂದರೆ…
ನಿನ್ನಲ್ಲಿರುವ ದುಡ್ಡನ್ನು
ಎಣಿಸುತ್ತಾ ಕೂರಬೇಡ.
ಒಂದು ಹನಿ ಕಣ್ಣಿರು
ಹಾಕಿ ನೋಡು
ಅದನ್ನೊರೆಸಲು
ನಿನ್ನ ಸುತ್ತ ಎಷ್ಟು ಮಂದಿ
ಸೇರಿರುತ್ತಾರೋ ಎಣಿಸಿ ನೋಡು…

೩. ಅರಿಯದ ಪ್ರೀತಿ , ಮರೆಯದ ಸ್ನೇಹ ,
ಅಳಿಸಿ ಹೋಗುವ ಈ ಪುಸ್ತಕದಲ್ಲಿ ! ಏನೆಂದು ಬರೆಯಲಿ !
ಆದರೂ ಬರೆಯುತ್ತೇನೆ !
"ಸ್ನೇಹ"ವೆಂಬ ಎರಡಕ್ಷರ ಅಮರವಾಗಿರಲಿ !

೪. ಇದ್ದಾರೆ ಪ್ರಪಂಚದಲ್ಲಿ ಹಲವಾರು ಜನ,
ಬಯಸುತ್ತಾರೆ ಎಲ್ಲ ಪ್ರೀತಿ ವಿಶ್ವಾಸವಿರುವ ಮನ,
ನಿನ್ನ ನನ್ನ ಪರಿಚಯವಾದ ಆ ದಿನ,
ಸ್ನೇಹ ಹುಟ್ಟುವ ಹಾಗೆ ಮಾಡಿತು ಯಾವುದೊ ಒಂದು ಸೆಳೆತನ,
ಇಂದಿಗೂ ಬೇರಾಗದಂತಿದೆ ನಮ್ಮಿಬರ ಗೆಳತನ.
ಇದು ಹೀಗೆ ಅಮರವಾಗಿರಲಿ ಗೆಳಯ/
( ಯಾವ್ದೋ ಆಟೋಗ್ರಾಫ್ ಬುಕ್ ಅಲ್ಲಿ ಕಂಡಿದ್ದು )

ಹುಡಗಿಯರ ಬಗ್ಗೆ ಒಂದಿಷ್ಟು .

೧. ನಾವು ಮುಗ್ದ ಹುಡುಗರಾಗಿ ಇರ್ಥಿವ್ವಿ
ಆದ್ರೆ ಈ ಹುಡುಗಿರು ತಂಗಾಳಿ ಯಾಗಿ ಬಂದು,
ಬರಿಧಾದ ಮನಸ್ಸಿನ ಅಂಗಳದಲ್ಲಿ ಪ್ರೀತಿ ಅನ್ನೋ ರಂಗೋಲಿ ಬರೆದು ..
ಕಾಣದೆ ಇರೋ ಕನಸಿನ ಲೋಕಾನೆ ತೋರಿಸ್ತಾರೆ
ಇನ್ನು ನಮ್ಮ ಮುಗ್ದ ಮನಸ್ಸಿಗೆ ಅವರನ್ನು ಬಿಟ್ಟು
ಬೇರೆ ಪ್ರಪಂಚನೆ ಇಲ್ಲ ಅನ್ನೋವಾಗ
ಅಪ್ಪ ಹೇಳ್ದ , ಅಣ್ಣ ಹೇಳ್ದ ,ಅಮ್ಮ ಹೇಳ್ದ್ಲುಅಂತ ಮೋಸದ ಮಳೆ ಸುರಿದು
ಪ್ರೀತಿ ರಂಗೋಲಿ ಜೊತೆಗೆ ಮನಸ್ಸನು ಕೊಂದು
ಬರಿ ನೋವಿನ ನೆನಪುಗಳನ್ನು ಬಿಟ್ಟು ಹೋಗ್ತಾರೆ .
ಹುಡುಗೀರೆ ನೀವೇಕೆ ಹೇಗೆ..................????????????

೨. ನೀನಿಲ್ಲದೇ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ
ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೇ ನೀನು
ಎದೆಯಾಸೆ ಎನೋ ಎಂದು ನೀ ಕಾಣದಾದೇ
ನಿಶೆಯೊಂದೇ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೇ ನಿನ್ನಿಂದ ನಾ ಬಯಸಿದೆ

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ
ಜೊತೆ ಇರುವೆಯ ಗೆಳತಿ................?????

೩. ಮಳೆಯಲ್ಲಿ ನೆನೆಯುವಾಗ
ಮೊದಲ ನೆನಪು ನಿನ್ನದೇ
ಸೂರ್ಯನು ಉದಯಿಸುವಾಗ
ಮೊದಲ ನೆನಪು ನಿನ್ನದೇ
ನಾನು ಬರೆಯುವ ಮೊದಲ ಕವನ ನಿನ್ನದೇ

೪. ಹೇ ಗೆಳತಿ...............
ಬದುಕು ಅಂದರೆ ನದಿಯ ಹಾಗೆ
ಕೊನೆ ಇಲ್ಲದ ಪಯಣ ……
ಯಾವುದೂ ನಮ್ಮ ಜೊತೆ
ಉಳಿಯುವುದಿಲ್ಲ ……….
ಉಳಿಯುದು ಒಂದೇ……………
ಅದು ನೀನು ಹೃದಯ ತಟ್ಟಿದ ನೆನಪು ಮತ್ತು ಕೊಟ್ಟ ನೋವು ಮಾತ್ರ

೫. ನನ್ನ ನಿನ್ನ ಜೀವನದಲ್ಲಿ ಕಹಿಯಾದ ..
ಮತ್ತು ಮದುರವಾದ ಭಾವನೆಗಳು ಹಂಚಿಕೊಳ್ಳಲು ..
ಒಂದು ಒಳ್ಳೆ ಹೃದಯದ ಅವಶ್ಯಕತೆ ಇದೆ ಅಲ್ಲವಾ ???? .
ಜಗತ್ಹನು ಬೆಳಗಲು ಸೂರ್ಯ ಎಷ್ಟು ಮುಖ್ಯವೋ ,
ಮಗುವನ್ನು ಬೆಳಸಲು ತಾಯಿ ಎಷ್ಟು ಮುಖ್ಯವೋ ..
ಹಾಗೆ ಸ್ನೇಹವೆಂಬುದು ಪ್ರತಿಯುಬ್ಬ ಜೀವಿಗೂ ಬಹು ಮುಖ್ಯ
ಸ್ನೇಹಮೃತವನು ಒದಗಿಸುವೆಯ ಗೆಳತಿ..............???

೬. ಮಾತು ದೂರದರೇನು
ಭಾಂಧವ್ಯದ ನೆನಪು ಸದಾ ಹಸಿರು
ಮಾಸದ ಮಾಗದ ಹಳೆ ನೆನಪು
ಕಾಡುತಿದೆ ಕಾಡಿಸುತಿದೆ ನಿನ್ನಯ ಪ್ರೀತಿ
ಪ್ರೀತಿಯ ಕಡಲಿನ ಮಣಿಮುತ್ತಿನಾಗೆ
ಕಾಪಾಡುವ ಹೊತ್ತಲ್ಲಿ ನನ್ನ ಮರಿಬೇಡ ಪ್ರಿಯೆ..........

೭. ಸುಮ್ಮನೆ ಇದ್ದ ನನ್ನ ಮನಸ್ಸಲ್ಲಿ
ನಿನ್ನ ಭಾವನೆಗಳ ಬೀಜ ಬಿತ್ತಿ,
ಪ್ರೀತಿಯ ಸಸಿ ಚಿಗುರುವ ಮುನ್ನವೆ
ಅದನ್ನ ಚಿಗುಟಿ ಹಾಕಿದ ಹುಡುಗಿ ನಿನ್ಯಾರೆ???

ಸ್ನೇಹ ಮಾತಾಡುತ್ತೆ
ಪ್ರೀತಿ ಸುಮ್ಮನಿರುತ್ತೆ
ಸ್ನೇಹ ನಗಿಸುತ್ತೆ
ಪ್ರೀತಿ ಅಳಿಸುತ್ತೆ
ಸ್ನೇಹ ಸೇರಿಸುತ್ತೆ
ಪ್ರೀತಿ ದೂರ ಮಾಡುತ್ತೆ
ಆದರೂ . . .
ಈ ಜನ ಯಾಕೆ
ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ

ಆಗೆಲ್ಲ ನನ್ನ ಕಣ್ಣಲ್ಲೇ
ಕನಸುಗಳು ಗೂಡುಕಟ್ಟುತ್ತವೆ ಎಂದು
ಬೀಗುತ್ತಿದ್ದ ಕಾಲ
ವಯಸ್ಸು ಹದಿನೈದೋ ಹದಿನಾರೋ...
ಚಾದರದ ಒಳಗೊಳಗೇ ಮುದುರಿ,
ಮಗ್ಗುಲು ಬದಲಾಯಿಸದೆ
ಬೆಳಗು ಹಾಯಿಸಿದ ರಾತ್ರಿಗಳು
ಇಂದು ಯೋಚಿಸಿದರೆ
ತೀರ ಸಿಲ್ಲಿ ಸಿಲ್ಲಿ!

ಜಡೆ ಹೆಣೆಯುವಾಗ
ಕನ್ನಡಿಯ ಆ ತುದಿಯಲ್ಲಿ
ಯಾರೋ ಕಣ್ಣು ಮಿಟುಕಿಸಿದಂತೆ ಎನಿಸಿ
ಬೈತಲೆಗೆ ತುಟಿ ತಾಕಿಸಿದಂತೆ ಭ್ರಮಿಸಿ
ಸರಸರನೆ ಹೆಜ್ಜೆ ಹಾಕಿ
ಕಿಟಕಿಯ ಬದಿಯ ಜಾಗವನ್ನೇ ಆಯ್ದು
ರಸ್ತೆಯತ್ತ ನೋಟ ನೆಟ್ಟಾಗ
ಕಣ್ಣಲ್ಲಿ ಹಸಿ-ಹಸಿ ವಿರಹ...

ದೇಹ ಚಿಗಿತುಕೊಳ್ಳುವ ಹೊತ್ತಲ್ಲಿ
ಪ್ರತಿ ಎಲೆಯ ವಾಸನೆಯನ್ನೂ
ಗ್ರಹಿಸುವ ಉಮೇದಿನಲ್ಲಿ
ಕಣ್ಣಲ್ಲಿ ಗೂಡು ಕಟ್ಟಿದ್ದ ಕನಸು
ಒಬ್ಬರಿಂದೊಬ್ಬರಿಗೆ ವರ್ಗ
ವಾಗುತ್ತ - ಬಣ್ಣಬಣ್ಣದ
ಮೊಟ್ಟೆಗಳನ್ನು ಇಡುತ್ತ ಹೋದದ್ದು
ತಿಳಿಯಲೇ ಇಲ್ಲ
ಪುಟಾಣಿ ಅಲೆಗಳನ್ನು
ಗ್ರಹಿಸುವ ವಯಸ್ಸೂ ಅದಲ್ಲ

ದಿನ ಕಳೆದಂತೆ
ಕನಸು ಮೊಟ್ಟೆಗಳಲ್ಲಿ ಯಾವವೂ
ಮರಿಯಾಗದೆ ಜಳ್ಳಾಗಿ
ಬಿಟ್ಟವು ಬರಿದೇ ತಮ್ಮ
ಚಿಪ್ಪುಗಳನ್ನು ಉಳಿಸಿ...
ಆದರೂ
ನಿಮಗೆಲ್ಲ ಋಣಿ ನಾನು
ಅಂಗಾಂಗ ಚಿಗುರಿಸಿದ್ದಕ್ಕೆ
ಕನಸ ಕುದುರಿಸಿದ್ದಕ್ಕೆ.

ಒಂದು ಮನವಿ.......................

ಯಾವ ಕಣ್ಣು ನಿಮ್ಮನ್ನು
ನೋಡ ಬಯಸುವುದಿಲ್ಲವೋ …….
ಆ ಕಣ್ಣೀ ನತ್ತ ತಿರುಗಿಯೂ
ನೋಡಬೇಡಿ……..
ನಿಮ್ಮನೆ ಹುಡುಕುವ ಕಣ್ಣುಗಳಿಂದ
ಯಾವತ್ತೂ ಮರೆಯಾಗಬೇಡಿ ……
ಈ ದಿನ ನಿಮ್ಮ ಪುಟ್ಟ ಹೃದಯಕ್ಕೆ ಸಂತೋಷ ತರಲಿ

ಇಂತೀ ಪ್ರೀತಿಯ
ನಾಗೇಶ್